ಆಡಳಿತ ವರದಿ

ಸುಮಾರು 35 ವರ್ಷಗಳ ಇತಿಹಾಸ ಹೊಂದಿರುವ ಈ ಸಹಕಾರ ಸಂಘವು 1991ನೇ ವರ್ಷದಲ್ಲಿ ನೋಂದಣಿ ಸಂಖ್ಯೆ : UBC:UOG:81:17324:90-91. 1959ರ ಮೇರೆಗೆ ನೊಂದಾಯಿಸಲ್ಪಟ್ಟು, ಪ್ರತಿವರ್ಷವು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ಈ ಸಹಕಾರ ಸಂಘದ ಆಡಳಿತ ಸಮಿತಿ ಪರವಾಗಿ ತಮ್ಮೆಲ್ಲರನ್ನು ಇಂದು ನಡೆಯುತ್ತಿರುವ 33ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ಹಾರ್ಧಿಕವಾಗಿ ಸ್ವಾಗತಿಸಿ, ಆಡಳಿತ ವರದಿ ಮಂಡಿಸಲು ನನಗೆ ತುಂಬಾ ಸಂತೋಷವಾಗುತ್ತದೆ.

ಸಂಘದ ಸ್ಥೂಲ ಪರಿಚಯ
  1. ಸದಸ್ಯತ್ವ : ವರದಿ ಸಾಲಿನ ಪ್ರಾರಂಭದಲ್ಲಿ ಸಂಘದ 1276 ಸದಸ್ಯರಿದ್ದು, ಕೆಲವು ಸದಸ್ಯರು ಮೃತಪಟ್ಟು ಹಾಗೂ ನಿವೃತ್ತಿಯಿಂದ ಒಟ್ಟು 54 ಸದಸ್ಯರು ತಮ್ಮ ಸದಸ್ಯತ್ವ ವಾಪಸ್ಸು ಪಡೆದುಕೊಂಡಿದ್ದು, ಉಳಿಕೆ ಸದಸ್ಯರು 1988 ಹಾಗೂ 36 ಹೊಸ ಸದಸ್ಯರ ಸೇರ್ಪಡೆಯಿಂದ ಸಂಘವು ಹಾಲಿ ಒಟ್ಟು 1258 ಸದಸ್ಯರುಗಳನ್ನು ಹೊಂದಿರುತ್ತದೆ.
  2. ಷೇರು ಬಂಡವಾಳ : ಸಹಕಾರ ಸಂಘದ ವರದಿ ಸಾಲಿನ ಪ್ರಾರಂಭದಲ್ಲಿ 3,05,70,500-00 ರೂ. ಇದ್ದು ಷೇರು ಮೊತ್ತ 40,20,000-00 ರೂ. ಸ್ವೀಕೃತವಾಗಿದ್ದು ಈ ಪೈಕಿ 9,33,200-00 ರೂ.ಗಳನ್ನು ವಾಪಸ್ಸು ಮಾಡಲಾಗಿ ಸಾಲಿನ ಅಂತ್ಯಕ್ಕೆ 3,36,57,300-00 ರೂ. ಷೇರು ಮೊತ್ತ ಇರುತ್ತದೆ.
  3. ಸಾಲಗಳು : ಈ ಸಹಕಾರ ಸಂಘದ ಬಂಡವಾಳ ಹಾಗೂ ಸದಸ್ಯರುಗಳ ಉಳಿತಾಯದ ಹಣದಿಂದ ಮಾನ್ಯ ಸದಸ್ಯರುಗಳಿಗೆ ಸಾಲ ನೀಡಲಾಗುತ್ತಿದೆ. ಹಾಗೂ 641 ಸದಸ್ಯರುಗಳು ಸಂಘದಿಂದ ಸಾಲವನ್ನು ಪಡೆದುಕೊಂಡಿರುತ್ತಾರೆ ವರದಿ ಸಾಲಿನಲ್ಲಿ 1001610596.97-00 ರೂ.ಗಳ ಸಾಲವನ್ನು ನೀಡಲಾಗಿದೆ. ಹಾಗೂ ಇಲ್ಲಿಯವರೆಗೆ 1133622968.81-00ರೂ.ಗಳ ಸಾಲ ನೀಡಲಾಗಿರುತ್ತದೆ ಎಂಬ ಅಂಶವನ್ನು ಮಹಾಸಭೆಗೆ ತಿಳಿಸಲು ಹರ್ಷಿಸುತ್ತೇನೆ.
  4. ತ್ರೀಫ್ಟ್ ಉಳಿತಾಯ ನಿಧಿ : ಸಂಘವು ತನ್ನದೇ ಆದ ಸ್ವಂತ ಬಂಡವಾಳ ಕ್ರೂಢೀಕರಿಸಿಕೊಳ್ಳಲು ಸದಸ್ಯರುಗಳಿಂದ ಶ್ರೀಫ್ಟ್ (ಉಳಿತಾಯ) ನಿಧಿಯನ್ನು ವಸೂಲು ಮಾಡುತ್ತಿದ್ದು, ವರದಿ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 61710910-00 ರೂ.ಗಳ ತ್ರೀಫ್ಟ್ ನಿಧಿಯನ್ನು ಹೊಂದಿರುತ್ತದೆ.
  5. ಇತರೆ ನಿಧಿಗಳು : ಸಾಲಿನ ಅಂತ್ಯದವರೆಗೆ ಸಂಘವು ಅಪದ್ಧನ ಠೇವಣಿಯಾಗಿ 75642495.35-00 ರೂ. ಗಳನ್ನು 264400-00 ರೂ.ಗಳ ಬಿ.ಡಿ.ಸಿ.ಸಿ. ಬ್ಯಾಂಕ್ ಷೇರು ಮೊತ್ತವನ್ನು ಸಹ ಹೊಂದಿರುತ್ತದೆ.
  6. ಮರಣೋತ್ತರ ಪರಿಹಾರ ನಿಧಿ : ಸಂಘವು ಸದಸ್ಯರುಗಳಿಂದ 200-00ರೂ. ಮಾತ್ರ ಮರಣ ಪರಿಹಾರ ವಂತಿಗೆಯನ್ನು ವಸೂಲು ಮಾಡುತ್ತಿದ್ದು, ಮೃತ ಸದಸ್ಯರ ನಾಮ ನಿರ್ದೇಶಿತರಿಗೆ ರೂ. 2,00,000-00ಗಳನ್ನು ಮರಣಾನಂತರ ಪರಿಹಾರವಾಗಿ ತಕ್ಷಣವೇ ವಿತರಿಸಲಾಗುತ್ತಿದೆ. ವರದಿ ಸಾಲಿನಲ್ಲಿ ಮೃತರಾದ 1 ಸದಸ್ಯರಿಗೆ ಒಟ್ಟು 2,00,000 ರೂ.ಗಳ ಮರಣ ಪರಿಹಾರವನ್ನು ಪಾವತಿಸಲಾಗಿದೆ.
  7. ನಿಶ್ಚಿತ ಠೇವಣಿ : ನಿಶ್ಚಿತ ಠೇವಣಿ : ಸಹಕಾರ ಸಂಘವು ಸರ್ವೆ ನಿಶ್ಚಿತ ಠೇವಣಿಯನ್ನು ಸದಸ್ಯರುಗಳಿಂದ ಅಕರ್ಷಕ ಬಡ್ಡಿ ನೀಡುವ ಮುಖಾಂತರ ಸಂಗ್ರಹಿಸುತ್ತಿದೆ. ವರದಿ ಸಾಲಿನ ಅಂತ್ಯಕ್ಕೆ 2662 ಜನ ಠೇವಣಿದಾರರಿಂದ ಒಟ್ಟು 927990500-00ರೂ.ಗಳ ನಿಶ್ಚಿತ ಠೇವಣಿಯನ್ನು ಹೊಂದಿರುತ್ತದೆ.
  8. ಆವರ್ತಕ ಠೇವಣಿ : ಸಂಘದ ಸದಸ್ಯರುಗಳು ಮತ್ತು ಸಾರ್ವಜನಿಕರಲ್ಲಿ ಉಳಿತಾಯ ಮನೋಭಾವ ಬೆಳೆಸಲು ಆರ್.ಡಿ. ಉಳಿತಾಯ ಖಾತೆ ಯೋಜನೆ ಪ್ರಾರಂಭಿಸಿದ್ದು ದಿ: 27-3-2026ಅಂತ್ಯಕ್ಕೆ ರೂ. 18206701-00 ರೂಗಳ ಆರ್‌.ಡಿ. ಠೇವಣಿ
  9. ಸಭೆಗಳು : ಸಂಘದ ಕಾರ್ಯಚಟುವಟಿಕೆಗಳನ್ನು ಕುರಿತು ಚರ್ಚೆ ಹಾಗೂ ನಿರ್ಧಾರ ಕೈಗೊಳ್ಳಲು ಪ್ರತಿ ಮಾಹೆ ಮಾಸಿಕ ಸಭೆಗಳನ್ನು ನಡೆಸಿರುತ್ತದೆ. 2025-26ನೇ ಸಾಲಿನಲ್ಲಿ ಒಟ್ಟು 12 ಸಭೆಗಳನ್ನು ನಡೆಸಲಾಗಿರುತ್ತದೆ.

ಸಂಘದ ಲೆಕ್ಕಪತ್ರಗಳನ್ನು ಸಂಪೂರ್ಣವಾಗಿ ಗಣಕೀರಣಗೊಳಿಸುವ ನಿಟ್ಟಿನಲ್ಲಿ ಸಾಫ್ಟ್ವೇರ್ ಅಳವಡಿಸಿಕೊಂಡಿದ್ದು, ಈಗಾಗಲೇ ಎಲ್ಲಾ ಕಛೇರಿಗಳಿಗೆ ಕಂಪ್ಯೂಟರ್ ಮುಖೇನ ಸಾಲ ಮುರಿಕೆ ವಿವರದ ತ:ಖ್ತೆ ಕಳುಹಿಸಲಾಗುತ್ತಿದೆ ಎಲ್ಲಾ ವಿವಿಧ ಕಾರ್ಯಗಳನ್ನು ಗಣಕೀಕರಣ ಮುಖೇನ ನಡೆಸಲಾಗುತ್ತಿದೆ. ಸದಸ್ಯರ ಲೆಕ್ಕಗಳಲ್ಲಿ ಯಾವುದೇ ತಪ್ಪುಗಳಿಗೆ ಆಸ್ಪದವಾಗದಂತೆ ಗಣಕೀಕರಣದ ಮೂಲಕ ಹೆಚ್ಚಿನ ಮುತುವರ್ಜಿವಹಿಸಿ ನಡೆಸಲಾಗುತ್ತಿದೆ.

ಹಾಲಿ PUNJAB NATIONAL BANK, BHEL MYSORE ROAD ಶಾಖೆಯಲ್ಲಿ ಚಾಲ್ತಿ ಖಾತೆ ತೆರೆದಿರುವುದರಿಂದ ರಾಜ್ಯದ ಯಾವ ಮೂಲೆಯಲ್ಲಿರುವ ಸದಸ್ಯರು ನೇರವಾಗಿ ಈ ಖಾತೆಗೆ ಸಾಲದ ಕಂತನ್ನು ಪಾವತಿಸಬಹುದಾಗಿದೆ. ಇದರಿಂದ ಸದಸ್ಯರ ಮೇಲಿನ ಹೆಚ್ಚಿನ ಬಡ್ಡಿ ಹೊರೆಯನ್ನು ತಪ್ಪಿಸಿ, ಸಕಾಲದಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಆಧುನಿಕ ಯುಗದಲ್ಲಿ ಕಛೇರಿಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಕಛೇರಿಗಳನ್ನು ಆಧುನಿಕರಣಗೊಳಿಸುವುದು ಅತ್ಯವಶ್ಯವಾಗಿದೆ. ಸಂಘದ ಕಛೇರಿಯನ್ನೂ ಸಹ ಆಧುನೀಕರಣಗೊಳಿಸಿ, ಶೀಘ್ರವಾಗಿ ಕಛೇರಿ ಕೆಲಸಗಳು ಸುಸೂತ್ರವಾಗಿ ನಡೆಸಲು ಅನುಕೂಲ ಕಲ್ಪಿಸಲಾಗಿದೆ. ಅಲ್ಲದೆ, ಅಂತರ್ಜಾಲ ಸಂಪರ್ಕದ ಮೂಲಕ ಸಾಲ ಮುರಿಕೆ ತ:ಖ್ತೆಯನ್ನು ಸಂಬಂಧಿಸಿದ ACCOUNTS ಕಛೇರಿಯ ತಪಾಸಕರ ಇ ಮೇಲ್‌ಗೆ ಕಳುಹಿಸಲಾಗುತ್ತಿದೆ. ಇದರಿಂದ ಕಛೇರಿಗಳಿಂದ ಶೀಘ್ರವಾಗಿ ಸಾಲವಸೂಲಾತಿಗೆ ಸಾಧ್ಯವಾಗಲಿದೆ.

ಸಂಘದ ಸುಸ್ತಿದಾರರ ಬಗ್ಗೆ ಆಡಳಿತ ಮಂಡಲಿಯು ಕಠಿಣ ನಿರ್ಧಾರಗಳನ್ನು ಕೈಗೊಂಡು ಸುಸ್ತಿದಾರರ ಸಂಖ್ಯೆಯನ್ನು ಕಡಿಮೆಗೊಳಿಸಲು ಶ್ರಮಿಸುತ್ತಿದೆ. ಹಾಲಿ ಸಂಘದಲ್ಲಿ ಸಂಘದ ಷೇರು ಮತ್ತು ತೀಫ್ಟ್ ಹಣದಿಂದಲೇ ಸಂಘವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ.

ಎಲ್ಲ ಬಟವಾಡೆ ಅಧಿಕಾರಿಗಳು ಸದಸ್ಯರುಗಳ ಉಳಿತಾಯ ಮತ್ತು ಸಾಲ ಮುರಿಕೆಯನ್ನು ವಿಷಯ ನಿರ್ವಾಹಕರ ಮುಖೇನ ಹೆಚ್.ಆರ್.ಎಂ.ಎಸ್. ನಲ್ಲಿ ಅಳವಡಿಸಿ ಮುರಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕೋರಿದೆ ಹಾಗೂ ಈ ನಿಟ್ಟಿನಲ್ಲಿ ಸಂಘವು ಸಹಕರಿಸಲು ಸಿದ್ಧವಾಗಿರುತ್ತದೆ.

ಇಲಾಖೆಯ ಎಲ್ಲಾ ಅಧಿಕಾರಿಗಳು ಸಂಘದೊಂದಿಗೆ ಸಹಕರಿಸಿ, ಸಂಘದ ಕೋರಿಕೆಯಂತೆ ಸದಸ್ಯರಿಂದ ಸಾಲದ ಕಂತನ್ನು ವಸೂಲಿ ಮಾಡಿ ಸಕಾಲಕ್ಕೆ ಕಳುಹಿಸುತ್ತಿರುವುದರಿಂದ ಸಂಘವು ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತದೆ. ಅಲ್ಲದೆ ಇ.ಸಿ.ಎಸ್. ಅಳವಡಿಸಿಕೊಂಡು ಸಾಲ ವಸೂಲಿ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ಕೋರಿದೆ. ಅಲ್ಲದೆ, ಸಾಲ ವಸೂಲಿ ಮಾಡದೇ ಇರುವ ಕಛೇರಿಯ ಮುಖ್ಯಸ್ಥರು ಇನ್ನು ಮುಂದೆ ಸದಸ್ಯರ ವೇತನದಲ್ಲಿ ಸಾಲವನ್ನು ಮುರಿಕೆ ಮಾಡಿ ಸಂಘಕ್ಕೆ ಪಾವತಿಸುವ ಮೂಲಕ ಸಾಲ ವಸೂಲಾತಿ ಹೆಚ್ಚಿಸಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ವಿನಯಪೂರ್ವಕವಾಗಿ ಕೋರುತ್ತೇನೆ.

ಮಾನ್ಯ ಆಯುಕ್ತರನ್ನು ಒಳಗೊಂಡು ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆ ಸಹಕಾರಕ್ಕಾಗಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದರೊಂದಿಗೆ ಎಲ್ಲರಿಗೂ ಮತ್ತೊಮ್ಮೆ ವಂದನೆಗಳನ್ನು ಸಲ್ಲಿಸುತ್ತೇನೆ. ತಾವೆಲ್ಲರೂ ಉತ್ಸಾಹಪೂರ್ವಕವಾಗಿ ಸಹಕಾರ ಮನೋಭಾವದಿಂದ ನೀಡಲಾಗುತ್ತಿರುವ ಬೆಂಬಲ ಮತ್ತು ಪ್ರೋತ್ರಾಹಕ್ಕೆ ಸಂಘದ ಆಡಳಿತ ಸಮಿತಿ ಸದಸ್ಯರು ಅಭಾರಿಗಳಾಗಿರುತ್ತಾರೆ.

ಸದಸ್ಯರಿಗೆ ಬೆಂಬಲ ನೀಡುವುದು ಮುಖ್ಯ ಉದ್ದೇಶ
ಸಹಕಾರಿ ಸಮಾಜವು ಸಾಮಾನ್ಯ ಅಗತ್ಯಗಳನ್ನು ಹೊಂದಿರುವ ವ್ಯಕ್ತಿಗಳ ಸ್ವಯಂಪ್ರೇರಿತ ಸಂಘವಾಗಿದೆ ಸಾಮಾನ್ಯ ಆರ್ಥಿಕ ಆಸಕ್ತಿಯ ಸಾಧನೆ.